
ಮೂಡುಬಿದಿರೆ: ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವವು ಮಾರ್ಚ್ 11ರ ಮಂಗಳವಾರ ಮೊದಲ್ಗೊಂಡು 19 ರ ಬುಧವಾರದವರೆಗೆ ನಡೆಯಲಿದೆ.11ರ ಮಂಗಳವಾರ ಬೆಳಿಗ್ಗೆ 9ಗಂಟೆಗೆ ಕುಂಟ ಮುಹೂರ್ತ.13ರ ಗುರುವಾರ ಬೆಳಿಗ್ಗೆ ನಾಗದೇವರ ಸಾನಿಧ್ಯದಲ್ಲಿ ತಂಬಿಲ ಸೇವೆ, ಮಹಾಪೂಜೆ, ಸಂಜೆ 6 ಗಂಟೆಗೆ ಅಂಕುರಾರೋಪಣ, ಉತ್ಸವ ಬಲಿ.14ರ ಶುಕ್ರವಾರ ಬೆಳಿಗ್ಗೆ 8ರಿಂದ ಕಲಶ ಪ್ರಧಾನ ಹೋಮ,12-05ಕ್ಕೆ ಧ್ವಜಾರೋಹಣ, ಮಧ್ಯಾಹ್ನ ಅನ್ನ ಸಂತರ್ಪಣೆ,ಉತ್ಸವ ಬಲಿ, ಕಂಚಿಲಾಲೆ. ರಾತ್ರಿ 9:30 ರಿಂದ ಇರುವೈಲು ದುರ್ಗಾಪರಮೇಶ್ವರಿ ಯಕ್ಷಗಾನ […]
ಮೂಡುಬಿದಿರೆ: ಶ್ರೀ ಕ್ಷೇತ್ರ ಇರುವೈಲಿನಿಂದ ಕಟೀಲು ಶ್ರೀ ಭ್ರಮರಾಂಬಿಕೆಯ ಸನ್ನಿಧಿಗೆ ಊರ-ಪರವೂರ ಭಕ್ತ ವೃಂದ ಶ್ರೀ ಕ್ಷೇತ್ರ ಇರುವೈಲು ಇದರ ನೇತೃತ್ವದಲ್ಲಿ ನಾಳೆ ಮುಂಜಾನೆ 3.30 ಕ್ಕೆ ಲೋಕ ಕಲ್ಯಾಣಾರ್ಥ ಹಾಗೂ ಭಕ್ತಾದಿಗಳ ಅಭೀಷ್ಟೆಯ ಫಲಸಿದ್ಧಿಗಾಗಿ ೧೨ ನೇ ವರ್ಷದ ಭಕ್ತಿಯ ನಡಿಗೆ ಅಮ್ಮನೆಡೆಗೆ ಪಾದಯಾತ್ರೆಯು ಭಜನಾ ಸಂಕೀರ್ತನೆಯೊಂದಿಗೆ ಸಾಗಲಿದೆ. ಭಕ್ತಾದಿಗಳು ಸಮಯಕ್ಕೆ ಸರಿಯಾಗಿ ಕ್ಷೇತ್ರದಲ್ಲಿ ಹಾಜರಾಗಬೇಕು. ಹಾಗೂ ಕಟೀಲಿನಿಂದ ಇರುವೈಲಿಗೆ ಬರಲು ವಾಹನದ ವ್ಯವಸ್ಥೆ ಇದ್ದು, ಲಘು ಉಪಹಾರದ ವ್ಯವಸ್ಥೆಯು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮೂಡುಬಿದಿರೆ: ತಾಲೂಕಿನ ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಸುಜಾತ ಜೆ.ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರ ಆದೇಶದಂತೆ ವ್ಯವಸ್ಥಾಪನಾ ಸಮಿತಿಯ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದೆ.ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ದೇವಸ್ಥಾನದ ಪ್ರಧಾನ ಅರ್ಚಕ ಐ ರಾಘವೇಂದ್ರ ಭಟ್ ಇರುವೈಲ್, ಶಿವಾನಂದ ನಾಯ್ಕ್, ಪ್ರದೀಪ್ ಶೆಟ್ಟಿ, ಪೂವಪ್ಪ ಸಾಲ್ಯಾನ್,ಶುಭಕರ ಕಾಜವ, ಪದ್ಮನಾಭ ಪೂಜಾರಿ, ಮೋಹನ್ ನಾಯಕ್,ಮತ್ತು ದೀಪಾ ಆಯ್ಕೆಯಾಗಿದ್ದಾರೆ.
ಮೂಡುಬಿದಿರೆ: ಇದು ಗೂಗಲ್ ಮಾಹಿತಿ ಸುನಾಮಿಯ ಕಾಲ, ಆದರೆ, ಶಿಕ್ಷಕರ ಸ್ಥಾನ ತುಂಬಲು ಗೂಗಲ್ ಗೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ನಮ್ಮ ತರಗತಿಯಲ್ಲಿ ಏಕೆ ಕುಳಿತುಕೊಳ್ಳಬೇಕು ಎಂದು ಶಿಕ್ಷಕರು ತಮ್ಮಲ್ಲಿ ಪ್ರಶ್ನಿಸಿಕೊಳ್ಳಬೇಕು. ಆಗ ತರಗತಿಯ ಎಲ್ಲ ವಿದ್ಯಾರ್ಥಿಗಳು ಬುದ್ಧಿವಂತರಾಗುತ್ತಾರೆ ಎಂದು ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ರಾಮಚಂದ್ರ ಸೆಟ್ಟಿ ಹೇಳಿದರು.ಆಳ್ವಾಸ್ ಪ್ರಕೃತಿಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಯೋಗ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ನಡೆದ ಆರು ದಿನಗಳ ರಾಷ್ಟ್ರೀಯ ಮಟ್ಟದ […]
ಮೂಡುಬಿದಿರೆ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಶ್ರೀ ಕ್ಷೇತ್ರ ಇರುವೈಲು ಇದರ ೭೫ ನೇ ಭಜನಾ ಮಂಗಲೋತ್ಸವದ ನಗರ ಭಜನೆಯು ಆದಿತ್ಯವಾರ ದೇವಿಯ ಸನ್ನಿಧಿಯಲ್ಲಿ ಪೂಜಾ ವಿಧಿ ವಿಧಾನಗಳನ್ನು ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ನೇರವೇರಿಸಿದರು. ಕೈಯಲ್ಲಿ ತಾಳ ಹಿಡಿದು ಭಜಕರೊಡಗೂಡಿ ಭಜನೆಯನ್ನು ಹಾಡಿ ೭೫ ರ ಸಂಭ್ರಮದ ಭಜನಾ ಮಂಗಲೋತ್ಸವದ ಮನೆ ಮನೆ ನಗರ ಭಜನೆಯನ್ನು ದೇವಿಯ ಸನ್ನಿಧಿಯಿಂದ ಪ್ರಾರಂಭಿಸಿದರು.ಭಜನಾ ಪ್ರಿಯೇ ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಧನು ಸಂಕ್ರಮಣದಿಂದ ಆರಂಭಗೊಂಡು ಮಕರ ಸಂಕ್ರಮಣದವರೆಗೆ […]