Subscriber Content
Add content here that will only be visible to your subscribers.

Add content here that will only be visible to your subscribers.


ಮಂಗಳೂರು, 5 ಜೂನ್ 2024: ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಸಿರು ಸ್ನೇಹವನ್ನು ಬೆಳೆಸುವ ಉದ್ದೇಶದಿಂದ ‘ಪರಿಸರ ಮೈತ್ರಿ’ಯ ಯಶಸ್ವಿ ಉದ್ಘಾಟನೆಯನ್ನು ಹೆಮ್ಮೆಯಿಂದ ಘೋಷಿಸಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮತ್ತು ಉದ್ಘಾಟಕರಾಗಿ ದಕ್ಷಿಣ ಕನ್ನಡದ ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ರವರ ಗೌರವಾನ್ವಿತ ಉಪಸ್ಥಿತಿ ಉದ್ಘಾಟನೆಯನ್ನು ಅಲಂಕರಿಸಿತು. ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಯ ಮಹತ್ವವನ್ನು ಹೇಳಿ ಸಸಿ ನೆಡುವ ಮೂಲಕ ಪರಿಸರ ಮೈತ್ರಿಯ ಪ್ರಾರಂಭವನ್ನು ಸಾಂಕೇತಿಕವಾಗಿ ಗುರುತಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ನಂದನ್ ಮಲ್ಯ, ಕಾರ್ಪೊರೇಟರ್ ಶ್ರೀ ಗಣೇಶ್, ಶ್ರೀ ಅಲಂಕಾರ್ ಬಾಬು, ಸಂಸ್ಥೆಯ ಅಧ್ಯಕ್ಷರು ಡಾ.ರಾಘವೇಂದ್ರ ಹೊಳ್ಳ ಹಾಗೂ ಪ್ರಾಂಶುಪಾಲರು ಡಾ. ಮಾಲಿನಿ ಎನ್ ಹೆಬ್ಬಾರ್ ಉಪಸ್ಥಿತರಿದ್ದರು.
ಪರಿಸರ ಮೈತ್ರಿ ಯುವಜನರು, ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಕರು ಸಮುದಾಯದಲ್ಲಿ ಪರಿಸರ ಜಾಗೃತಿ ಮತ್ತು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸಿದೆ. ಈ ಕಾರ್ಯಕ್ರಮ ವಿಶ್ವ ಪರಿಸರ ದಿನದ ಜಾಗತಿಕ ಆಚರಣೆಯೊಂದಿಗೆ ಸಂಯೋಜಿಸಲ್ಪಟ್ಟಿದೆ, ಪರಿಸರ ಸಂರಕ್ಷಣೆ ಮತ್ತು ಹಸಿರು ಜೀವನಕ್ಕೆ ಬದ್ಧತೆಯನ್ನು ಬಲಪಡಿಸುತ್ತದೆ.

ADVRTISEMENT



Leave a Reply