Subscriber Content

Add content here that will only be visible to your subscribers.

ಸ್ನಾನಗೃಹ ದುರಂತ: ಮೂಡುಬಿದಿರೆ ಯುವಕನ ಉಸಿರುಗಟ್ಟಿ ಮರಣ

ಮೂಡುಬಿದಿರೆ:

ಕೋಟೆಬಾಗಿಲು ಪ್ರದೇಶದ ನಿವಾಸಿ ಅನ್ಸಾರ್ ಅವರ ಪುತ್ರ ಶಾರಿಕ್, ಭಾನುವಾರ ರಾತ್ರಿ ಸ್ನಾನಗೃಹದಲ್ಲಿ ಸಂಭವಿಸಿದ ದುರಂತದಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

ಕೋಟೆಬಾಗಿಲಿನ ಅಪಾರ್ಟ್‌ಮೆಂಟ್‌ನಲ್ಲಿ ಶಾರಿಕ್ ಮತ್ತು ಅವರ ತಾಯಿ ವಾಸಿಸುತ್ತಿದ್ದರು. ಶಾರಿಕ್ ಸ್ನಾನಕ್ಕೆಂದು ತೆರಳಿದಾಗ, ಆತನ ತಾಯಿ ನಿದ್ರಿಸುತ್ತಿದ್ದರು. ಆದರೆ, ಬಹಳ ಹೊತ್ತಾದರೂ ಶಾರಿಕ್ ಹೊರಬರದೇ ಇದ್ದಾಗ, ರಾತ್ರಿ ಮನೆಗೆ ಬಂದ ಶಾರಿಕ್‌ನ ಸಹೋದರ ಸ್ನಾನಗೃಹದ ಬಾಗಿಲು ಒಡೆದು ನೋಡಿ, ದುರ್ಘಟನೆ ಬೆಳಕಿಗೆ ತಂದುಕೊಂಡರು.

ಸ್ನಾನಗೃಹದ ಗ್ಯಾಸ್ ಗೀಸರ್‌ನಿಂದ ಉಂಟಾದ ಕೆಮಿಕಲ್ ಸ್ಪ್ರೇಡ್ ಆಗಿ ಶಾರಿಕ್ ಉಸಿರುಗಟ್ಟಿದ ಘಟನೆ ನಡೆದಿದೆ.

ಶಾರಿಕ್ ದ್ವಿತೀಯ ಪಿಯುಸಿ ಮುಗಿಸಿ, ಮೂಡುಬಿದಿರೆಯ ಒಂದು ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಗ್ರಿ ವಿದ್ಯಾರ್ಥಿಯಾಗಿದ್ದು, ಕಲಿಕೆಯಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿದ್ದಾನೆಂದು ತಿಳಿದುಬಂದಿದೆ.

ADVRTISEMENT