Subscriber Content
Add content here that will only be visible to your subscribers.

Add content here that will only be visible to your subscribers.


ಮೂಡುಬಿದಿರೆ: ಬಸ್ ಏಜೆಂಟ್ ಮತ್ತು ನಿರ್ವಾಹಕರಾಗಿದ್ದ ಗಣೇಶ್ (45) ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪೇಟೆಗೆ ಹೂ ಮತ್ತು ಪತ್ರಿಕೆಗಳನ್ನು ತಂದ ಅವರು ಮನೆಗೆ ಹಿಂದಿರುಗುತ್ತಿದ್ದಾಗ ಎದೆನೋವು ಕಾಣಿಸಿಕೊಂಡು, ತಕ್ಷಣ ಅವರನ್ನು ಜಿ.ವಿ.ಪೈ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ದುರದೃಷ್ಟವಶಾತ್, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಈ ಹಿಂದೂ ಒಂದು ಬಾರಿ ಹೃದಯಾಘಾತದಿಂದ ಬಳಲಿದ ಗಣೇಶ್, ಅಂದಿನ ಚಿಕಿತ್ಸೆಯಿಂದ ಬೇರೆಯಾದರೂ, ಈ ಬಾರಿ ಅದೃಷ್ಟ ಅವನ ಕೈಚೆಲ್ಲಿತು. ಮೂಡುಬಿದಿರೆಯಲ್ಲಿ ಹಲವು ವರ್ಷಗಳಿಂದ ಬಸ್ ಸಿಬ್ಬಂದಿಯಾಗಿ, ಬೇರೆ ವಾಹನಗಳ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ಗಣೇಶ್, ತನ್ನ ಆತ್ಮೀಯ ನಡೆನುಡಿಗಳಿಂದ ಎಲ್ಲರಿಗೂ ಪ್ರೀತಿಯ ವ್ಯಕ್ತಿಯಾಗಿದ್ದರು.
ADVRTISEMENT


