Subscriber Content

Add content here that will only be visible to your subscribers.

ಪೆರಾಡಿಯಲ್ಲಿ ಮನೆ ಕುಸಿತ : ರಕ್ಷಿತ್ ಶಿವರಾಂ ಭೇಟಿ

ಪೆರಾಡಿ: ಅಗಸ್ಟ್ 01
ಬೆಳ್ತಂಗಡಿ ತಾಲೂಕಿನಲ್ಲಿ ವಾರಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಪೆರಾಡಿ ಗ್ರಾಮದ ಕನ್ಯಾನ ಸಾರಮ್ಮ ಎಂಬ ಮಹಿಳೆಯ ಮನೆಯು ಸಂಪೂರ್ಣವಾಗಿ ಕುಸಿದು ಬಿದ್ದು ನೆಲಸಮಗೊಂಡಿದ್ದು ಈ ಕುಟುಂಬವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ. ರಕ್ಷಿತ್ ಶಿವರಾಂ ಬೇಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ಕ್ರಮಗಳನ್ನು ನೀಡುವ ಭರವಸೆಯನ್ನು ನೀಡಿದರು.

ನಿಯೋಗದಲ್ಲಿ ಬದ್ರಿಯಾ ಜುಮಾ ಮಸೀದಿ ಪೆರಾಡಿ ಅಧ್ಯಕ್ಷರಾದ ಅಬ್ದುಲ್ ಸಲಾಂ ಮರೋಡಿ, ಜಮಾಅತ್ ಖತೀಬ್ ಸಫ್ವಾನ್ ಬಾಖವಿ ಮಾಪಾಲ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತಸ್ಲಿಂ, ಶರೀಫ್ ದುಗನೊಟ್ಟು, ಹಮೀದ್ ನೆಲ್ಲಿಗುಡ್ಡೆ ಮುನವ್ವರ್ ರಾಝಿಕ್ ಸೇರಿದಂತೆ ಪ್ರದೇಶದ ಪ್ರಮುಖರು ಉಪಸ್ಥಿತರಿದ್ದರು.

ADVRTISEMENT

Leave a Reply

Your email address will not be published. Required fields are marked *