Subscriber Content

Add content here that will only be visible to your subscribers.

ಮೂಡುಬಿದಿರೆ: ಮುಂದುವರಿದ ಬಿರುಗಾಳಿ ಅಬ್ಬರ೬ ಮನೆಗಳಿಗೆ ಹಾನಿ, ಧರಾಶಾಯಿಯಾದ ವಿದ್ಯುತ್ ಕಂಬಗಳು, ಅಟೋಸ್ಟಾಂಡ್ ಗೆ ಹಾನಿ

ಮೂಡುಬಿದಿರೆ: ಮುಂದುವರಿದ ಬಿರುಗಾಳಿ ಅಬ್ಬರ
೬ ಮನೆಗಳಿಗೆ ಹಾನಿ, ಧರಾಶಾಯಿಯಾದ ವಿದ್ಯುತ್ ಕಂಬಗಳು, ಅಟೋಸ್ಟಾಂಡ್ ಗೆ ಹಾನಿ

ಮೂಡುಬಿದಿರೆ , ಜು.22: ಸೋಮವಾರವೂ ಮೂಡುಬಿದಿರೆ ಪರಿಸರದಲ್ಲಿ ಬಿರುಗಾಳಿ ಸಹಿತ ಆಗಾಗ ಜೋರಾಗಿ ಮಳೆ ಸುರಿದು ವ್ಯಾಪಕ ಹಾನಿಯುಂಟಾಗಿದೆ. ಅಲಂಗಾರು, ಚಂದ್ರಾಪುರ, ಪಳಕಳ, ಆಶ್ರಯ ಕಾಲೋನಿ ಪರಿಸರದಲ್ಲಿ ಸೋಮವಾರ ಸಂಜೆ ಗಾಳಿಮಳೆಗೆ ೬ಮನೆಗಳು ಹಾನಿಗೀಡಾಗಿವೆ. ೧೫ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತ ವಾಗಿದೆ

ಅಲಂಗಾರ್ ಚರ್ಚ್ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದು ಕಾರಿಗೆ ಹಾನಿಯಾದರೂ ವಿಶುಕುಮಾರ್ ಶೆಟ್ಟಿ ಸುದೈವವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಚಂದ್ರಾಪುರದಲ್ಲಿ ನಾರಾಯಣ, ಶಾಂತಿ ರೋಡ್ರಿಗಸ್, ಸರಸ್ವತಿ ಶೆಟ್ಟಿಗಾರ್, ಜುಲಿಯಾನ ಡಿಸೋಜ, ಆಶ್ರಯ ಕಾಲೋನಿಯಲ್ಲಿ ಸತೀಶ್ ಸಾಲ್ಯಾನ್ ಮತ್ತೊಂದು ಮನೆಗೆ ಭಾಗಶಃ ಹಾನಿಯಾಗಿದೆ.

ಅಲಂಗಾರ್ ಜಂಕ್ಷನ್:
ಅಲಂಗಾರ್ ರಿಕ್ಷಾ ಜಂಕ್ಷನ್‌ನಲ್ಲಿ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಅಲ್ಲಿ ಆ ವೇಳೆಗೆ ಯಾವುದೇ ವಾಹನಗಳಿಲ್ಲದಿದ್ದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ.
ಪಡುಕೊಣಾಜೆ ವ್ಯಾಪ್ತಿಯಲ್ಲಿ ರಬ್ಬರ್ ಪ್ಲಾಂಟೇಶನ್‌ನಲ್ಲಿ ಹಲವು ಮರಗಳು ಉರುಳಿ ಬಿದ್ದಿವೆ. ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ವಾರ್ಡ್ ಸದಸ್ಯ ಪಿ.ಕೆ. ಥಾಮಸ್ , ಕಂದಾಯ, ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮೂಡುಬಿದಿರೆ ಬ್ಲಾಕ್ ಯುತ್ ಕಾಂಗ್ರೆಸ್ ಅಧ್ಯಕ್ಷ ಜಯರಾಜ್ , ಬಿಜೆಪಿ ಪ್ರಮುಖ ರಂಜಿತ್ ಪೂಜಾರಿ

ಚಿತ್ರ : ೨೨ ಎಂಡಿಬಿ ಹಾನಿ ೧
೨೨ ಎಂಡಿಬಿ ಹಾನಿ ೨

ADVRTISEMENT