ಮೂಡುಬಿದಿರೆ:ಕೇಂದ್ರ ಪುರಸ್ಕ್ರತ ಅಮೃತ್ ೨.೦ ಅಭಿಯಾನದ “ಅಮೃತ್ ಮಿತ್ರ” ಕಾರ್ಯಕ್ರಮದ ತಾಂತ್ರಿಕೇತರ ಚಟುವಟಿಕೆ ಕಾರ್ಯಕ್ರಮದಡಿ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿನ ಉದ್ಯಾನವನ ನಿರ್ವಹಣೆ ಮಾಡಲು ಡೇ-ನಲ್ಮ್ ಅಭಿಯಾನದಡಿ ಪಂಚಸೂತ್ರಗಳನ್ನು ಅನುಸರಿಸುವ ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳಿAದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಮೃತ ಯೋಜನೆಯ ಕೇಂದ್ರ ಪುರಸ್ಕ್ರತ ಯೋಜನೆಯಾಗಿದ್ದು ರಾಜ್ಯದಲ್ಲಿ ನಗರ ಸಳ್ಥೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶ ಅಮೃತ್ ೨.೦ ಅಭಿಯಾನದಡಿ ವಿವಿಧ ತಾಂತ್ರಿಕೇತರ ಚಟುವಟಿಕೆಗಳನ್ನು ಕೇಂದ್ರ ಪುರಸ್ಕ್ರತ ಯೋಜನೆಯಾದ ಡೇ-ನಲ್ಮ್ ಅಭಿಯಾನದಡಿ ಪುರಸಭೆಮೂಡುಬಿದಿರೆ ವ್ಯಾಪ್ತಿಯಲ್ಲಿ ರಚಿಸಲಾಗಿರುವ ಮಹಿಳಾ ಸ್ವ-ಸಹಾಯ ಸಂಘಗಳ ಮೂಲಕ ಸದರಿ ಚಟುವಟಿಕೆಗಳನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಟಾನಗೊಳಿಸಲು ಆಸಕ್ತಿ ಇರುವ ಡೇ-ನಲ್ಮ್ ಮಹಿಳಾ ಸ್ವ-ಸಹಾಯ ಸಂಘಗಳು ಭಾಗವಹಿಸಬಹುದಾಗಿರುತ್ತದೆ.ಆದ್ದರಿಂದ ಆಸಕ್ತ ಮಹಿಳಾ ಸ್ವ-ಸಹಾಯ ಸಂಘಗಳು ಈ ಕಾರ್ಯಲಯದಿಂದ ಅರ್ಜಿ ನಮೂನೆಯನ್ನು ಪಡೆದುಕೊಂಡು ದಿನಾಂಕ ೧೬-೧೨-೨೦೨೪ರ ಒಳಗಾಗಿ ಅರ್ಹ ಮತ್ತು ಆಸಕ್ತ ಮಹಿಳಾ ಸಂಘಗಳು ತಮ್ಮ ಪ್ರಸ್ತಾವನೆಯನ್ನು ಮುಚ್ಚಿದ ಲಕೋಟೆಯಲ್ಲಿ ಪುರಸಭಾ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಪುರಸಭಾಧ್ಯಕ್ಷರು, ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply