ಮೂಡುಬಿದಿರೆ: ಸಾಮಾಜಿಕ ಸೇವೆ ಸಲ್ಲಿಸುವ ಸಂಘಟನೆ ತ್ರಿಶೂಲ್ ಫ್ರೆಂಡ್ಸ್ ರಿ.ಬೆದ್ರ ಇವರ ಯೋಜನೆಯ ಅಡಿಯಲ್ಲಿ ಮೂಡುಮಾರ್ನಾಡು ತಂಡ್ರಕೆರೆ ಎಂಬಲ್ಲಿ ಸಂಘಟನೆಯ ಯುವಕರೇ ಒಟ್ಟು ಸೇರಿ ನೂತನವಾಗಿ ನಿರ್ಮಿಸಲಾದ ಮನೆಯನ್ನು ಭಾನುವಾರ ಮನೆಯ ಯಜಮಾನ ಸುಂದರ ಇವರಿಗೆ ರಜಿನಿ ಶೆಟ್ಟಿ ಹಾಗೂ ಸಂಘಟನೆಯ ಯುವಕರು ಜತೆಗೂಡಿ ನಾಮಫಲಕವನ್ನು ಬಿಡುಗಡೆಗೊಳಿಸಿ ಮನೆಯ ಕೀ ಯನ್ನು ಹಸ್ತಾಂತರಿಸಿದರು.
ಕೀ ಹಸ್ತಾಂತರಿಸಿ ಮಾತನಾಡಿದ ರಜಿನಿ ಶೆಟ್ಟಿ ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯಿಂದ ಇನ್ನಷ್ಟು ಸಮಾಜ ಸೇವೆಯನ್ನು ಮಾಡುವಂತಾಗಲಿ, ಇವರ ಉತ್ತಮ ಸೇವಾ ಯೋಜನೆಗಳಿಗೆ ಭಗವಂತನ ಅನುಗ್ರಹವಿರಲೆಂದು ಹಾರೈಸಿದರು.
ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯ ಗೌರವಾಧ್ಯಕ್ಷ ಅಶ್ವಥ್ ಪಣಪಿಲ ಮಾತನಾಡಿ, ಈ ತಂಡದ ಸದಸ್ಯರು ನಿರಂತರವಾಗಿ ದೂರದಿಂದ ಕಲ್ಲು ಮಣ್ಣುಗಳನ್ನು ಹೊತ್ತುಕೊಂಡು ಕಷ್ಟಪಟ್ಟು ಕೆಲಸ ಮಾಡಿ ಈ ಬಡ ಕುಟುಂಬಕ್ಕೆ ಮನೆಯನ್ನು ಕಟ್ಟಿಕೊಟ್ಟಿದ್ದಾರೆ ಇವರ ಈ ಕೆಲಸ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ಸಂಘಟನೆಯ ಯುವಕರೆಲ್ಲಾರನ್ನು ಅಭಿನಂದಿಸಿ, ಈ ಮನೆಯಿಂದ ಈ ಕುಟುಂಬವೂ ಸುಖಕರವಾಗಿರಲಿ ಎಂದರು.
ತ್ರಿಶೂಲ್ ಫ್ರೆಂಡ್ ಸಂಘಟನೆಯ ಅಧ್ಯಕ್ಷ ರಕ್ಷಿತ್ ಮಾತನಾಡಿ ಇದುವರೆಗೂ ವೈದ್ಯಕೀಯ ಸೇವೆ ಹಾಗೂ ಇನ್ನಿತರ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದು ಇದೀಗ ಮೊದಲ ಬಾರಿಗೆ ಒಂದು ಬಡ ಕುಟುಂಬಕ್ಕೆ ಸೂರನ್ನು ಕಟ್ಟಿಕೊಡುವ ಕೆಲಸವನ್ನು ಸಂಘಟನೆಯ ಎಲ್ಲಾ ಯುವಕರ ಸಹಕಾರದೊಂದಿಗೆ ಮಾಡಲಾಗಿದೆ. ಎಂದು ತಿಳಿಸಿದ ಅವರು ಮುಂದಿನ ದಿನಗಳಲ್ಲೂ ಇಂತಹ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಂಘಟನೆಯು ನಿರಂತರವಾಗಿ ಸಕ್ರಿಯರಾಗಿ ಭಾಗವಹಿಸುದೆಂದು ತಿಳಿಸಿದರು.
ಮನೆಯ ಯಜಮಾನ ಸುಂದರ ಅವರು ಮಾತನಾಡಿ ಸಂಘಟನೆಯ ಯುವಕರು ಕಷ್ಟಪಟ್ಟು ದೂರದಿಂದ ಕಲ್ಲು ಮಣ್ಣುಗಳನ್ನು ತಂದು ನಮಗೆ ಸೂರನ್ನು ನಿರ್ಮಿಸಿ ಕೊಟ್ಟು ನಮ್ಮ ಕುಟುಂಬದ ಕಷ್ಟಕ್ಕೆ ನೆರವಾಗಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ತ್ರಿಶೂಲ್ ಫ್ರೆಂಡ್ಸ್ ವತಿಯಿಂದ ಬಡ ಕುಟುಂಬಕ್ಕೆ ನೂತನ ಸೂರು ಹಸ್ತಾಂತರ
ಮೂಡುಬಿದಿರೆ: ಸಾಮಾಜಿಕ ಸೇವೆ ಸಲ್ಲಿಸುವ ಸಂಘಟನೆ ತ್ರಿಶೂಲ್ ಫ್ರೆಂಡ್ಸ್ ರಿ.ಬೆದ್ರ ಇವರ ಯೋಜನೆಯ ಅಡಿಯಲ್ಲಿ ಮೂಡುಮಾರ್ನಾಡು ತಂಡ್ರಕೆರೆ ಎಂಬಲ್ಲಿ ಸಂಘಟನೆಯ ಯುವಕರೇ ಒಟ್ಟು ಸೇರಿ ನೂತನವಾಗಿ ನಿರ್ಮಿಸಲಾದ ಮನೆಯನ್ನು ಭಾನುವಾರ ಮನೆಯ ಯಜಮಾನ ಸುಂದರ ಇವರಿಗೆ ಸಮಾಜ ಸೇವಕಿ ರಜಿನಿ ಶೆಟ್ಟಿ ಹಾಗೂ ಸಂಘಟನೆಯ ಯುವಕರು ಜತೆಗೂಡಿ ನಾಮಫಲಕವನ್ನು ಬಿಡುಗಡೆಗೊಳಿಸಿ ಮನೆಯ ಕೀ ಯನ್ನು ಹಸ್ತಾಂತರಿಸಿದರು.
ಕೀ ಹಸ್ತಾಂತರಿಸಿ ಮಾತನಾಡಿದ ರಜಿನಿ ಶೆಟ್ಟಿ ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯಿಂದ ಇನ್ನಷ್ಟು ಸಮಾಜ ಸೇವೆಯನ್ನು ಮಾಡುವಂತಾಗಲಿ, ಇವರ ಉತ್ತಮ ಸೇವಾ ಯೋಜನೆಗಳಿಗೆ ಭಗವಂತನ ಅನುಗ್ರಹವಿರಲೆಂದು ಹಾರೈಸಿದರು.
ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯ ಗೌರವಾಧ್ಯಕ್ಷ ಅಶ್ವಥ್ ಪಣಪಿಲ ಮಾತನಾಡಿ, ಈ ತಂಡದ ಸದಸ್ಯರು ನಿರಂತರವಾಗಿ ದೂರದಿಂದ ಕಲ್ಲು ಮಣ್ಣುಗಳನ್ನು ಹೊತ್ತುಕೊಂಡು ಕಷ್ಟಪಟ್ಟು ಕೆಲಸ ಮಾಡಿ ಈ ಬಡ ಕುಟುಂಬಕ್ಕೆ ಮನೆಯನ್ನು ಕಟ್ಟಿಕೊಟ್ಟಿದ್ದಾರೆ ಇವರ ಈ ಕೆಲಸ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ಸಂಘಟನೆಯ ಯುವಕರೆಲ್ಲಾರನ್ನು ಅಭಿನಂದಿಸಿ, ಈ ಮನೆಯಿಂದ ಈ ಕುಟುಂಬವೂ ಸುಖಕರವಾಗಿರಲಿ ಎಂದರು.
ತ್ರಿಶೂಲ್ ಫ್ರೆಂಡ್ ಸಂಘಟನೆಯ ಅಧ್ಯಕ್ಷ ರಕ್ಷಿತ್ ಮಾತನಾಡಿ ಇದುವರೆಗೂ ವೈದ್ಯಕೀಯ ಸೇವೆ ಹಾಗೂ ಇನ್ನಿತರ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದು ಇದೀಗ ಮೊದಲ ಬಾರಿಗೆ ಒಂದು ಬಡ ಕುಟುಂಬಕ್ಕೆ ಸೂರನ್ನು ಕಟ್ಟಿಕೊಡುವ ಕೆಲಸವನ್ನು ಸಂಘಟನೆಯ ಎಲ್ಲಾ ಯುವಕರ ಸಹಕಾರದೊಂದಿಗೆ ಮಾಡಲಾಗಿದೆ. ಎಂದು ತಿಳಿಸಿದ ಅವರು ಮುಂದಿನ ದಿನಗಳಲ್ಲೂ ಇಂತಹ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಂಘಟನೆಯು ನಿರಂತರವಾಗಿ ಸಕ್ರಿಯರಾಗಿ ಭಾಗವಹಿಸುದೆಂದು ತಿಳಿಸಿದರು.
ಮನೆಯ ಯಜಮಾನ ಸುಂದರ ಅವರು ಮಾತನಾಡಿ ಸಂಘಟನೆಯ ಯುವಕರು ಕಷ್ಟಪಟ್ಟು ದೂರದಿಂದ ಕಲ್ಲು ಮಣ್ಣುಗಳನ್ನು ತಂದು ನಮಗೆ ಸೂರನ್ನು ನಿರ್ಮಿಸಿ ಕೊಟ್ಟು ನಮ್ಮ ಕುಟುಂಬದ ಕಷ್ಟಕ್ಕೆ ನೆರವಾಗಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಸಂಘಟನೆಯ ಸಲಹೆಗಾರರಾದ ಸೋಮಶೇಖರ್, ಹಾಗೂ ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯ ಸದಸ್ಯರುಗಳು ಈ ಸಂದರ್ಭದಲ್ಲಿದ್ದರು.
ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯ ಸಲಹೆಗಾರರಾದ ಸೋಮಶೇಖರ್, ಹಾಗೂ ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯ ಸದಸ್ಯರುಗಳು ಈ ಸಂದರ್ಭದಲ್ಲಿದ್ದರು.
Leave a Reply