ವಾಯನಾಡಿನಲ್ಲಿ ಕಾರ್ಯನಿರ್ವಹಿಸಿದ ಭಾರತೀಯ ಮಿಲಿಟರಿ ಕಮಾಂಡರ್‌ಗಳಿಗೆ ಮೂಡುಬಿದಿರೆಯಲ್ಲಿ ಮೆಸ್ಕಾಂನಿಂದ ಅಭಿನಂದನೆ

ಮೂಡುಬಿದಿರೆ: ಕೇರಳದ ವಯನಾಡಿನಲ್ಲಿ ನಡೆದ ದುರಂತದಲ್ಲಿ ತುರ್ತು ಕಾರ್ಯಾಚರಣೆ ಪೂರೈಸಿ ಹಿಂದಿರುಗಿದ ಭಾರತೀಯ ಮಿಲಿಟರಿ ಕಮಾಂಡರ್‌ಗಳಿಗೆ, ಮೂಡುಬಿದಿರೆಯ ಮೆಸ್ಕಾಂ ಅಧಿಕಾರಿಗಳು ಮತ್ತು ವಿದ್ಯುತ್ ಗುತ್ತಿಗೆದಾರರು ಶುಕ್ರವಾರ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್, ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ್ ನಿತೇಶ್, ಕಿರಿಯ ಇಂಜಿನಿಯರ್ ಮಮತಾ, ಕಿರಿಯ ಇಂಜಿನಿಯರ್ ಕೃಷ್ಣರಾಜ, ಪವರ್ ಮ್ಯಾನ್ ಪಪ್ಪುಕುಮಾರ, ಮಾಪಕ ಓದುಗ ವಿಜಯ, ಗುತ್ತಿಗೆದಾರರಾದ ಸತ್ಯಪ್ರಕಾಶ್ ಹೆಗ್ಡೆ, ಅನಿಶ್ ಡಿಸೋಜ, ವಿಶ್ವಾಲ್ ತೋಡಾರ್, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.

ADVRTISEMENT

Leave a Reply

Your email address will not be published. Required fields are marked *